`ಅನ್ವೇಶಿ` ಚಿತ್ರೀಕರಣ ಮುಕ್ತಾಯ
Posted date: 31 Wed, Dec 2014 – 09:22:55 AM

ಶ್ರೀಲಕ್ಷ್ಮೀವೆಂಕಟೇಶ್ವರ ಎಂಟರ್ ಟೈನರ್ ಲಾಂಛನದಲ್ಲಿ ವಿ.ಜಯರಾಂ ಅವರು ನಿರ್ಮಿಸುತ್ತಿರುವ ‘ಅನ್ವೇಶಿ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಉಡುಪಿ, ಗೋವಾದಲ್ಲಿ ೪೫ದಿನಗಳ ಚಿತ್ರೀಕರಣ ನಡೆದಿದೆ. ಫ಼ೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ವೇಮಗಲ್ ಜಗನ್ನಾಥರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ತಿಲಕ್ ಅಭಿನಯಿಸುತ್ತಿದ್ದಾರೆ. ಅನಿ ಅಗರವಾಲ್, ಶ್ರದ್ಧಾ ಶರ್ಮ, ರಾಘವೇಂದ್ರ ಭಟ್, ಶ್ರೀ, ಅವಿನಾಶ್, ಬ್ಯಾಂಕ್ ಜನಾರ್ದನ್, ರಮೇಶ್ ಭಟ್, ದೀಪಕ್, ದಿಶಾ ಪೂವಯ್ಯ, ರಮ್ಯ ಬಾರ್ನ, ರಘು ರಂಜನ್, ನವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹೇಮಂತ್ ಸಂಗೀತ ನೀಡಿದ್ದಾರೆ. ಶಿವು ಸಂಕಲನ, ಅರವಿಂದ್ ನೃತ್ಯ ನಿರ್ದೇಶನ, ಅಲ್ಟಿಮೆಟ್ ಶಿವು  ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed